ಗುರುವಾರ, ಫೆಬ್ರವರಿ 22, 2018

ಅರಿವಿಗೆ ಮೀರಿದ್ದು


ಸಾವಿಗೆ ಜಿನುಗಿದ ಕಣ್ಣೀರು
ಖಾಲಿತನದ ಬಿರುಗಾಳಿಯನ್ನೆಬ್ಬಿಸಿದೆ.
ಸಾವೆಂಬ ಪ್ರಶ್ನೆಗೆ ಉತ್ತರವಿಲ್ಲವೇ?!!

ಮುಚ್ಚಿದ ಕಣ್ಣು ಮಣ್ಣು ಕಾಣುವವರೆಗಷ್ಟೇ
ನನ್ನ ಜ್ಞಾನ.

ಕಣ್ಣು ಮುಚ್ಚಿ ತಪಸ್ಸಿಗೆ ಕುಳಿತರೆ
ಕಂಡದ್ದೆಲ್ಲ ನನ್ನ ಅರಿವಿನದೇ ಪರಿಷ್ಕೄತ ರೂಪ,
ಮಿಕ್ಕಿದ್ದೆಲ್ಲ ಕತ್ತಲೆಯ ಕೂಪ.
ಜ್ಞಾನೋದಯದಲ್ಲೂ ಸಾವಿನಾಚೆ ಕಂಡಿರಲಿಕ್ಕಿಲ್ಲ!!

ಸಾವಿನಾಚೆಯೇನೆಂದು ಗೊತ್ತಿದ್ದರೆ
ಜೀವನ ಪ್ರೀತಿ ಕಡಿಮೆಯಿರುತ್ತಿತ್ತೇನೋ?!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ