ಆದರೂ ಪ್ರೀತಿ ಬದಲಾಗಲಿಲ್ಲ!
ಹೊತ್ತೊಯ್ದ ರಾವಣ
ಭಾವನೆಗಳ ಮೇಲೆ ಹತ್ತಿ ಕುಣಿದರೂ,
ಸೀತೆ ಬದಲಾಗಲಿಲ್ಲ!
ಕತ್ತಲ ಕೂಪಕ್ಕೆ ನೂಕಿದರೂ,
ಬೆತ್ತಲಾಗಿಸಿ ಬಿಸಿಲಿಗೆ ನೂಕಿದರೂ,
ದೇಹವೂ, ಆತ್ಮವೂ ಕೊಳೆಯಾಗಲಿಲ್ಲ.
ಮುಗಿಯದ ಸಮಯವನ್ನು ಮುಗಿಸಲಾಗಿ
ಕಡಿಲಿನೆಡೆಗೆ ಸಾಯಲು ಹೆಜ್ಜೆಹಾಕುವಾಗ
ಕೇಳಿಸಿದೆ ದಡದ ದನಿ- " ನಾನೂ ತೆರೆಗಳಿಗಾಗಿ ಕಾಯುತ್ತಿಲ್ಲವೇ?!"
ಅಶೋಕ ವನದಲ್ಲಿ ಹೂವೇ ಅರುಳುತ್ತಿಲ್ಲವೆಂದರು
ಸೇವಕೀಯರು;
ರಾಮನ ಪ್ರೇಮ ರಾವಣನ ಬಂಧಿಯಾಗಿರುವಲ್ಲಿ
ಹೂವುಗಳಿಗೇನು ಕೆಲಸ?
ಊಟ ಬಿಟ್ಟರೆ ಅನ್ನಕ್ಕೆ ಅಪಮಾನ,
ಹಠ ಬಿಟ್ಟರೆ ತನ್ನತನಕ್ಕೆ ಅಪಮಾನ,
ಉಂಡು ತೇಗಿದ್ದು
ರಾವಣನಿಗೆ ಕೇಳಿಸಿತೆಂಬ ಭಯ.
ಇಷ್ಟವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಈ ಕಷ್ಟ?
ಪ್ರೀತಿಗೆ ಗುರುತ್ವ ಶಕ್ತಿ ಇಲ್ಲವೇ?!!!
ರಾಮನ ಪ್ರೇಮದ ನಿಮಿತ್ತ
ರವಣನೊಡನೆ ನಿತ್ಯ ಸಮರ ಸಾರಿ ಗೆದ್ದವಳು ಸೀತೆ;
ರಾಮ ನಿಮಿತ್ತ ಮಾತ್ರ!!
ಹೊತ್ತೊಯ್ದ ರಾವಣ
ಭಾವನೆಗಳ ಮೇಲೆ ಹತ್ತಿ ಕುಣಿದರೂ,
ಸೀತೆ ಬದಲಾಗಲಿಲ್ಲ!
ಕತ್ತಲ ಕೂಪಕ್ಕೆ ನೂಕಿದರೂ,
ಬೆತ್ತಲಾಗಿಸಿ ಬಿಸಿಲಿಗೆ ನೂಕಿದರೂ,
ದೇಹವೂ, ಆತ್ಮವೂ ಕೊಳೆಯಾಗಲಿಲ್ಲ.
ಮುಗಿಯದ ಸಮಯವನ್ನು ಮುಗಿಸಲಾಗಿ
ಕಡಿಲಿನೆಡೆಗೆ ಸಾಯಲು ಹೆಜ್ಜೆಹಾಕುವಾಗ
ಕೇಳಿಸಿದೆ ದಡದ ದನಿ- " ನಾನೂ ತೆರೆಗಳಿಗಾಗಿ ಕಾಯುತ್ತಿಲ್ಲವೇ?!"
ಅಶೋಕ ವನದಲ್ಲಿ ಹೂವೇ ಅರುಳುತ್ತಿಲ್ಲವೆಂದರು
ಸೇವಕೀಯರು;
ರಾಮನ ಪ್ರೇಮ ರಾವಣನ ಬಂಧಿಯಾಗಿರುವಲ್ಲಿ
ಹೂವುಗಳಿಗೇನು ಕೆಲಸ?
ಊಟ ಬಿಟ್ಟರೆ ಅನ್ನಕ್ಕೆ ಅಪಮಾನ,
ಹಠ ಬಿಟ್ಟರೆ ತನ್ನತನಕ್ಕೆ ಅಪಮಾನ,
ಉಂಡು ತೇಗಿದ್ದು
ರಾವಣನಿಗೆ ಕೇಳಿಸಿತೆಂಬ ಭಯ.
ಇಷ್ಟವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಈ ಕಷ್ಟ?
ಪ್ರೀತಿಗೆ ಗುರುತ್ವ ಶಕ್ತಿ ಇಲ್ಲವೇ?!!!
ರಾಮನ ಪ್ರೇಮದ ನಿಮಿತ್ತ
ರವಣನೊಡನೆ ನಿತ್ಯ ಸಮರ ಸಾರಿ ಗೆದ್ದವಳು ಸೀತೆ;
ರಾಮ ನಿಮಿತ್ತ ಮಾತ್ರ!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ