ಶುಕ್ರವಾರ, ಮಾರ್ಚ್ 16, 2018

ಸೀತೆ

ಆದರೂ ಪ್ರೀತಿ ಬದಲಾಗಲಿಲ್ಲ!

ಹೊತ್ತೊಯ್ದ ರಾವಣ
ಭಾವನೆಗಳ ಮೇಲೆ ಹತ್ತಿ ಕುಣಿದರೂ,
ಸೀತೆ ಬದಲಾಗಲಿಲ್ಲ!

ಕತ್ತಲ ಕೂಪಕ್ಕೆ ನೂಕಿದರೂ,
ಬೆತ್ತಲಾಗಿಸಿ ಬಿಸಿಲಿಗೆ ನೂಕಿದರೂ,
ದೇಹವೂ, ಆತ್ಮವೂ ಕೊಳೆಯಾಗಲಿಲ್ಲ.

ಮುಗಿಯದ ಸಮಯವನ್ನು ಮುಗಿಸಲಾಗಿ
ಕಡಿಲಿನೆಡೆಗೆ ಸಾಯಲು ಹೆಜ್ಜೆಹಾಕುವಾಗ
ಕೇಳಿಸಿದೆ ದಡದ ದನಿ- " ನಾನೂ ತೆರೆಗಳಿಗಾಗಿ ಕಾಯುತ್ತಿಲ್ಲವೇ?!"

ಅಶೋಕ ವನದಲ್ಲಿ ಹೂವೇ ಅರುಳುತ್ತಿಲ್ಲವೆಂದರು
ಸೇವಕೀಯರು;
ರಾಮನ ಪ್ರೇಮ ರಾವಣನ ಬಂಧಿಯಾಗಿರುವಲ್ಲಿ
ಹೂವುಗಳಿಗೇನು ಕೆಲಸ?

ಊಟ ಬಿಟ್ಟರೆ ಅನ್ನಕ್ಕೆ ಅಪಮಾನ,
ಹಠ ಬಿಟ್ಟರೆ ತನ್ನತನಕ್ಕೆ ಅಪಮಾನ,
ಉಂಡು ತೇಗಿದ್ದು
ರಾವಣನಿಗೆ ಕೇಳಿಸಿತೆಂಬ ಭಯ.

ಇಷ್ಟವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಈ ಕಷ್ಟ?
ಪ್ರೀತಿಗೆ ಗುರುತ್ವ ಶಕ್ತಿ ಇಲ್ಲವೇ?!!!

ರಾಮನ ಪ್ರೇಮದ ನಿಮಿತ್ತ
ರವಣನೊಡನೆ ನಿತ್ಯ ಸಮರ ಸಾರಿ ಗೆದ್ದವಳು ಸೀತೆ;
ರಾಮ ನಿಮಿತ್ತ ಮಾತ್ರ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ