ಶುಕ್ರವಾರ, ಏಪ್ರಿಲ್ 13, 2018

ಕಾಲ


ಹರಿದು ಹೋದ ಪುಸ್ತಕದಿಂದ
ಕಥೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ರಾಜಕುಮಾರನ ನಗು ವಿಜ್ಞಾನಿಯ
ಆಮ್ಲದ ಜಾಡಿಯಲ್ಲಿ ಹೊಗೆಯೆಬ್ಬಿಸಿದೆ.

ಆನೆಯೇ ಅಂಬಾರಿಯ ಮೇಲೆ ಕುಳಿತು
ಮೈಸೂರಿಗೆ ಹೊರಟಿದೆ.

ತೆನಾಲಿ ರಾಮ ದುಬೈ ಶೇಖರ ಆಸ್ಥಾನದಲ್ಲಿ.

ಮುದುಕನ ಮೂವರು ಮಕ್ಕಳೂ
ಮುದುಕರಾಗಿದ್ದಾರೆ.

ಕಮ್ಮಾರ ಚಿನ್ನದಂಗಡಿ ಇಟ್ಟಿದ್ದಾನೆ.
ಗುರುಗಳು ಭರತನಾಟ್ಯವಾಡುತ್ತಿದ್ದಾರೆ.
ಶಿಷ್ಯರೋ ಯುದ್ಧಭೂಮಿಯಲ್ಲಿ!!!

ಹರಿದುಹೋದ ಪುಸ್ತಕವನ್ನು ಜೋಡಿಸಹೋದಾಗ-
ಕಲಿಗಾಲವನ್ನು ಕಂಡಂತಾಯ್ತು!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ