ಗುರುವಾರ, ಏಪ್ರಿಲ್ 5, 2018

ತತ್ವ

ಹೊತ್ತಿ ಉರಿದರೆ ಕ್ರಾಂತಿ
ಆರಿಹೋದರೆ ಶಾಂತಿ
ಹುಟ್ಟು ಸಾವಿನ ನಡುವೆ
ಇಲ್ಲ ವಿಶ್ರಾಂತಿ.

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ,
ಜೀವಿಸುವ ಸಲುವಾಗಿ
ಎಲ್ಲ ಮರೆಯಬೇಕಲ್ಲ!!

ನಾಳೆ ನಿಶ್ಚಿತವಿಲ್ಲ
ನಿನ್ನೆ ಬದಲಾಗಿಲ್ಲ
ಇಂದು-
ನಾಳಿನ ಚಿಂತೆ
ನಿನ್ನೆಯ ನೋವು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ